ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಪೂರ್ವಭಾವಿ ಸಭೆ ! ವಿಶೇಷ ಹಾಗೂ ಅರ್ಥ ಪೂರ್ಣ ಆಚರಣೆಗೆ ಸರ್ವಾನುಮತ

ವರದಿ ಸುಂದರರಾಜ್ BA ಕಾರಟಗಿ
ಕಾರಟಗಿ ಸೆಪ್ಟೆಂಬರ್ 30,2025 ; ಕಾರಟಗಿ ತಾಲೂಕ ಆಡಳಿತ ವತಿಯಿಂದ ಅಕ್ಟೋಬರ್ 07 ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕುರಿತು ತಹಸಿಲ್ ಕಾರ್ಯಾಲಯದ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು. ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಕಾರಟಗಿ ತಹಸೀಲ್ದಾರರಾದ ಕುಮಾರಸ್ವಾಮಿ ವಹಿಸಿಕೊಂಡಿದ್ದರು. ವಾಲ್ಮೀಕಿ ಜಯಂತಿಯ ಆಚರಣೆ ಕುರಿತು ಚರ್ಚಿಸಲು ವಾಲ್ಮೀಕಿ ಸಮುದಾಯದ ಎಲ್ಲಾ ಮುಖಂಡರುಗಳು ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ತಾಲೂಕ ಆಡಳಿತದ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು. 2025 ರ ಅಕ್ಟೋಬರ್ 07 ನೆಯ ತಾರೀಖಿನಂದು ತಾಲೂಕ ಆಡಳಿತ ವತಿಯಿಂದ ಸಾಂಕೇತಿಕವಾಗಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ನಿರ್ಧರಿಸಲಾಯಿತು.

ಅಕ್ಟೋಬರ್ 07 ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಕಚೇರಿಯಲ್ಲಿ ಸಾಂಕೇತಿಕವಾಗಿ ಆಚರಿಸಿದ ನಂತರ ವಿಶೇಷವಾಗಿಯೂ ಆಚರಿಸಲು ಸಭೆಯಲ್ಲಿನ ಮುಖಂಡರುಗಳು ತಹಸೀಲ್ದಾರರಾದ ಕುಮಾರಸ್ವಾಮಿ ಅವರಿಗೆ ವಿನಂತಿಸಿಕೊಂಡರು. ಮುಖಂಡರುಗಳ ವಿನಂತಿಗೆ ತಹಸಿಲ್ದಾರರು ಒಪ್ಪಿಗೆಯನ್ನು ಸೂಚಿಸಿದರು.
ವಾಲ್ಮೀಕಿ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಸಭೆಯಲ್ಲಿರುವ ಮುಖಂಡರುಗಳು
ವಾಲ್ಮೀಕಿ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ತಾಲೂಕ ಆಡಳಿತದ ಎಲ್ಲಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ.

