ಸಮಾಜದ ಹಿತಕ್ಕಾಗಿ ಒಗ್ಗಟ್ಟಾಗೋಣ..ಶ್ರೀ ಬಸವ ಜಯಂತಿ ಮೃತ್ಯುಂಜಯ ಮಹಾಸ್ವಾಮಿಗಳು, ಕಾರಟಗಿ ತಾಲೂಕ ಪಂಚಮಶಾಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ
ವರದಿ ಸುಂದರರಾಜ್ BA ಕಾರಟಗಿ

ನಾವು ಯಾರು ಸಹ ಬೇರೆ ಬೇರೆ ಅಲ್ಲ ನಾವು ಒಂದೇ ತಾಯಿಯ ಮಕ್ಕಳು ಸಮಾಜದ ಹಿತಕ್ಕಾಗಿ ಒಗ್ಗಟ್ಟಾಗೋಣ.. ಶ್ರೀ ಬಸವ ಜಯಂತಿ ಮೃತ್ಯುಂಜಯ ಮಹಾಸ್ವಾಮಿಗಳು
ಕಾರಟಗಿಯಲ್ಲಿ ಪಂಚಮ ಶಾಲಿ ಸಮಾಜದ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಾಧಕರಿಗೆ ಸನ್ಮಾನ
ಕಾರಟಗಿ ; ನಾವು ಯಾರು ಸಹ ಬೇರೆ ಬೇರೆ ಅಲ್ಲ ನಾವು ಒಂದೇ ತಾಯಿಯ ಮಕ್ಕಳು ಸಮಾಜದ ಒಗ್ಗಟ್ಟಿನ ವಿಚಾರ ಬಂದಾಗ ನಾವೆಲ್ಲರೂ ಒಂದಾಗಬೇಕು ಎಂದು ಕೂಡಲ ಸಂಗಮ ಪೀಠದ ಜಗದ್ಗುರುಗಳಾದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು ಪಟ್ಟಣದ ಕೆರೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕಾರಟಗಿ ತಾಲೂಕ ಪಂಚಮ ಶಾಲಿ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಹಾಗೂ ಕಾರಟಗಿ ತಾಲೂಕ ನೂತನ ಪದಾಧಿಕಾರಿಗಳ ಪದ ಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳ ಸಮಾಜದ ವಿದ್ಯಾವಂತ ಮಕ್ಕಳ ಭವಿಷ್ಯಕ್ಕಾಗಿ ಮೀಸಲಾತಿ ಹೋರಾಟ ಅನಿವಾರ್ಯವಾಗಿದ್ದು, ಸಮಾಜದಲ್ಲಿ ಬಣಗಳ ಸೃಷ್ಟಿಮಾಡಿಕೊಳ್ಳುವುದು ಬೇಡ ಎಲ್ಲಾರು ಒಗ್ಗಟ್ಟಾಗಿ ಮೀಸಲಾತಿಗಾಗಿ ಸಂಘಟಕರಾಗೋಣ ಎಂದರು ನಂತರ ಹರಿಹರ ಪೀಠದ ಜಗದ್ಗುರು ಗಳಾದ ವಚನಾನಂದ ಸ್ವಾಮಿಗಳವರು ಮಾತನಾಡಿ ಸಮಾಜ ಒಂದಾಗ ಬೇಕು ಎನ್ನುವುದಕ್ಕಾಗಿ ನಾವು ಇಲ್ಲಿ ಸೇರಿದ್ದೇವೆ ನಮ್ಮಲ್ಲಿ ಯಾವುದೇ ದ್ವೇಷಗಳಿಲ್ಲ ನಾವು ಇಬ್ಬರು ಒಂದೇ ಎಂದರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜನೆ ಕುರಿತು ಕಾರಟಗಿ ಪಂಚಮಸಾಲಿ ಸಮಾಜವನ್ನು ಕುರಿತು ಕೊಂಡಾಡಿದರು,
ಕಾರ್ಯಕ್ರಮದಲ್ಲಿ 2023-24 ನೆ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಾಲೂಕಿನ ಪಂಚಮಸಾಲಿ ಸಮಾಜದ 15 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ 2024-25 ನೆಯ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ತಾಲೂಕಿನ ಪಂಚಮಸಾಲಿ ಸಮಾಜದ 36 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ ಜಿ ಗುಂಡಪ್ಪ ಅವರಿಗೆ ಸನ್ಮಾನಿಸಲಾಯಿತು ಅದೇ ರೀತಿ ಕೃಷಿ ಕ್ಷೇತ್ರದಲ್ಲಿ ಪಿ ಎಚ್ ಡಿ ಪದವಿ ಪಡೆದ ಕಾರಟಗಿ ತಾಲೂಕಿನ ಕುಮಾರಿ ರಂಜಿತ ತಂದೆ ರಮೇಶ್ ಆಯೋಧ್ಯ ಅವರನ್ನು ಸನ್ಮಾನಿಸಲಾಯಿತು ಅದೇ ರೀತಿ ಡಾಕ್ಟರೇಟ್ ಪದವಿ ಪಡೆದ ದೇವೇಂದ್ರಪ್ಪ ಬಳ್ಳೋಟಗಿ ಅವರನ್ನು ಸಹ ಸನ್ಮಾನಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ್ ಎತ್ತಿನಮನಿ ಅವರು ವಹಿಸಿಕೊಂಡಿದ್ದರು
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್ ತಂಗಡಗಿ ಅವರು ರಾಜ್ಯ ಪಂಚಮಿ ಶಾಲಿಯ ಅಧ್ಯಕ್ಷರಾದ ಸೋಮನಗೌಡ ಪಾಟೀಲ್, ಮಾಜಿ ಸಂಸದ ಕರಡಿ ಸಂಗಣ್ಣನವರು ಮಾಜಿ ಶಾಸಕ ಬಸವರಾಜ್ ದಡೇಸುಗೂರು ಮಾಜಿ ಸಂಸದ ಶಿವರಾಮೇಗೌಡ ಬಿಜೆಪಿ ಮುಖಂಡರಾದ ಬಸವರಾಜ್ ಕ್ಯಾವಟರ್ , ಪಂಚಮಿಶಾಲಿ ಜಿಲ್ಲಾಧ್ಯಕ್ಷ ಬಸವನಗೌಡ ತೊಂಡಿಹಾಳ, ಪಂಚಮಶಾಲಿ ತಾಲೂಕ ಅಧ್ಯಕ್ಷ ಪಾಲಾಕ್ಷಪ್ಪ ಕೆಂಡದ ತಾಲೂಕ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಅಣ್ಣಮ್ಮ ರಾಜ್ಯ ಪಂಚಮ ಶಾಲಿ ದಾಸೋಹ ಅಧ್ಯಕ್ಷರಾದ ಚನ್ನಬಸಪ್ಪ ಸುಂಕದ ಪಾಲ್ಗೊಂಡಿದ್ದರು
ಈ ಸಂದರ್ಭದಲ್ಲಿ ಶಶಿಧರಗೌಡ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷರಾದ ಅಮರೇಶ್ ಕುಳಗಿ ಪಂಪನಗೌಡ ಕೊಂತನೂರು, ಗುಂಡಪ್ಪ ಕುಳಗಿ ಶರಣೆಗೌಡ ಮಾಲಿ ಪಾಟೀಲ್ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಶರಣಪ್ಪ ಕೊತ್ವಾಲ್ ಹನುಮೇಶ್ ಗೌಡ ಸಂಗಮೇಶಗೌಡ ಬೂದುಗುಂಪ ಗುರುಸಿದ್ದಪ್ಪ ಯರಕಲ್ ದೇವಪ್ಪ ರಾಮತ್ನಾಳ ಸೇರಿದಂತೆ ತಾಲೂಕಿನ ಪಂಚಮಸಾಲಿ ಸಮಾಜದ ಗಣ್ಯರು ಕಾರ್ಯಕ್ರಮದಲ್ಲಿ ಇದ್ದರು