Uncategorized

ಅಂಜನಾದ್ರಿಗೆ ಮೂಲಭೂತ ಸೌಕರ್ಯ ಒದಗಿಸಿ; ಪಂಪಣ್ಣನಾಯಕ್ ಆಗ್ರಹ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿ ಹಾಗೂ ವಿಶ್ವ ಪ್ರಸಿದ್ಧಿ ಹೊಂದಿರುವ ಅಂಜನಾದ್ರಿ ಬೆಟ್ಟದ ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೇ ಬರುವಂತಹ ಬಕ್ತಾಧಿಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಸದರಿ ದೇವಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಅಂಜನಾದ್ರಿಯ ದರ್ಶನವನ್ನು ಪಡೆದುಕೊಂಡು ಬರುವಂತಹ ಭಕ್ತಾಧಿಗಳಿಗೆ ವಿಶ್ರಾಂತಿ ಕೊಠಡಿಗಳು, ಶೌಚಾಲಯ, ಶುದ್ಧ ಕುಡಿಯುವ ನೀರಿನ ಘಟಕ, ದೇವಸ್ಥಾನಕ್ಕೆ ಬರುವ ಜನರು ಕಾಯಿ ಹೊಡೆಯುವುದಕ್ಕೆ ಪ್ರತ್ಯೇಕ ಸ್ಥಳ, ಊಟದ ಸಭಾಂಗಣ, ಸ್ನಾನ ಗೃಹಗಳು, ಭಕ್ತಾಧಿಗಳು ರಾತ್ರಿಯಲ್ಲಿ ಬಂದು ಉಳಿದುಕೊಳ್ಳಲಿಕ್ಕೆ ವಸತಿ ಗೃಹಗಳ ವ್ಯವಸ್ಥೆ ಮಾಡಬೇಕಾಗಿರುತ್ತದೆ. ಪ್ರಸ್ತುತ ದೇವಸ್ಥಾನಕ್ಕೆ ಬಂದಂತಹ ಅನುದಾನವನ್ನು ಅತೀಬೇಗನೇ ಕಾಮಗಾರಿಗಳನ್ನು ಪೂರ್ಣಗಳೊಸಿ ಇನ್ನೂ ಹೆಚ್ಚಿನ ಅನುದಾನವನ್ನು ರಾಜ್ಯ ಸರ್ಕಾರ ಸಂಪೂಟದಿಂದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ಹೆಚ್ಚಿನ ಪ್ರಮಾಣದಲ್ಲಿ ಅನುದಾನವನ್ನು ಬಿಡುಗೊಳಿಸಿ, ಹಾಗೂ ರಾಜ್ಯ ಬಜೇಟ್ ಮಂಡನೆಯಲ್ಲಿ ಸದರಿ ದೇವಸ್ಥಾನಕ್ಕೆ ರೂ.೫.೦೦ ಕೋಟಿಯಷ್ಟು ಅನುದಾನವನ್ನು ಮೀಸಲು ಇಡಬೇಕು. ಇದರಿಂದ ಸದರಿ ನಮ್ಮ ಅಂಜನಾದ್ರಿ ದೇವಸ್ಥಾನವು ಅತೀ ಬೇಗ ಅಭಿಪಡಿಸಲು ಅನುಕೂಲವಾಗುತ್ತದೆ.


ಹಾಗೂ ಸದರಿ ನಮ್ಮ ದೇವಸ್ಥಾನದ ಸುತ್ತಮುತ್ತಲಿರುವ ಗ್ರಾಮ ಪಂಚಾಯತ್ಗಳಾದ ಆನೆಗೊಂದಿ, ಸಂಗಾಪೂರ, ರಾಂಪೂರ, ಮಲ್ಲಾಪೂರ ಹಾಗೂ ಸಣಾಪೂರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳು ಅಭಿವೃದ್ಧಿ ಹೊಂದಲು ಅರಣ್ಯ ಇಲಾಖೆಯು ಅಡ್ಡಿಪಡಿಸುತ್ತಿದ್ದು ಇದರಿಂದ ಸದರಿ ಗ್ರಾಮಗಳು ಅಭಿವೃದ್ಧಿಯಾಗಲು ಕುಂಟಿತಗೊಂಡಿರುತ್ತವೆ. ಕಾರಣ ಸದರಿ ಗ್ರಾಮಗಳನ್ನು ಗಾಂವ್ಠಾಣಾ ವ್ಯಾಪ್ತಿಗೆ ಸೇರ್ಪಡೆ ಮಾಡಿ ಸರ್ಕಾರದಿಂದ ಆದೇಶ ಮಾಡಿಸಬೇಕು ಇದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಭೀವೃದ್ದಿ ಮಾಡಲು ಅಂದರೆ ಸಣ್ಣ ಪುಟ್ಟ ಹೋಟೆಲ್, ವಸತಿ ಗೃಹ ಹಾಗೂ ಇನ್ನಿತರ ವ್ಯಾಫಾರ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಅಲ್ಲದೇ ಬರುವಂತಹ ಪ್ರವಾಸಿಗರಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ.
ಮುಂದುವರೆದು ಸದರಿ ನಮ್ಮ ಅಂಜನಾದ್ರಿ ಆಂಜನೇಯ ಬೆಟ್ಟದ ದೇವಸ್ಥಾನದಲ್ಲಿ ವಿದ್ಯಾದಾಸ ಬಾಬಾ ಇವರಿಂದ ದೇವಸ್ಥಾನದ ಸಿಬ್ಬಂದಿಗಳಿಗೆ ತಿಕ್ಕಾಟ ನಡೆಯುತ್ತಿದ್ದು ಇದರಿಂದ ದೇವಸ್ಥಾನದ ಅಭಿವೃದ್ಧಿ ಕುಂಟಿತವಾಗುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ವಿದ್ಯಾದಾಸ ಬಾಬಾ ಇವರ ಸುಪ್ರೀಂ ಕೋರ್ಟ ಆದೇಶದಂತೆ ಕೇಲವ ತಾವೇ ಖುದ್ದು ಪೂಜೆ ಅನುಮತಿ ಪಡೆದಿರುತ್ತಾರೆ ಆದರೆ ಇವರು ಸಪ್ರೀಂ ಕೋರ್ಟ ಆದೇಶವನ್ನು ಧಿಕ್ಕರಿಸಿ ಅಲ್ಲಿರುವ ಅಭಿವೃದ್ಧಿ ಇಲಾಖೆಯ ಸಿಬ್ಬಂಧಿಗಳಿಗೆ ಕೆಲಸ ಮಾಡಲು ತೊಂದರೆ ನೀಡುತ್ತಿದ್ದಾರೆ ಎಂದು ಕೆಲವೊಂದು ಸಿಬ್ಬಂದಿಗಳು ನಮ್ಮೊಂದಿಗೆ ತೊಂದರೆಯ ಸ್ವರೂಪವನ್ನು ತೊಡಿಕೊಂಡಿರುತ್ತಾರೆ. ವಿದ್ಯಾದಾಸ ಬಾಬಾ ಇವರಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ. ಮತ್ತು ಕರ್ನಾಟಕದ ದಾರ್ಮಿಕ ಸಂಪ್ರದಾಯದಂತೆ ಪೂಜೆಯನ್ನು ಸಹ ಸಲ್ಲಿಸಲು ಬರುತ್ತಿಲ್ಲ. ಇದರಿಂದ ನಮ್ಮ ಭಕ್ತಾದಿಗಳಿಗೆ ತುಂಬಾ ತೊಂದರೆಯಾಗಿರುತ್ತದೆ.
ಅದೇ ರೀತಿಯಾಗಿ ನಮ್ಮ ಕರ್ನಾಟದಿಂದ ಬೇರೆ ರಾಜ್ಯದಲ್ಲಿ ಹೊಗಿ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿದ್ದು ಅವರುಗಳ ಸದರಿ ರಾಜ್ಯದ ಭಾಷೆಯನ್ನು ಕಲಿತು ಆ ರಾಜ್ಯದ ಸಂಪ್ರದಾಯದಂತೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸುತ್ತಿದ್ದಾರೆ. ಅದೇ ರೀತಿಯಾಗಿ ವಿದ್ಯಾದಾಸ ಬಾಬಾರವರು ಸಹ ಕನ್ನಡವನ್ನು ಕಲಿತು ಕನ್ನಡ ಸಂಪ್ರದಾಯದಂತೆ ಪೂಜೆಯನ್ನು ಸಲ್ಲಿಸಬೇಕು ಎನ್ನುವುದು ನಮ್ಮ ಉದ್ದೇಶವಾಗಿರುತ್ತದೆ.
ಸದರಿ ವಿದ್ಯಾದಾಸ ಬಾಬಾರವರ ಕಾಲಾವಧಿಯಲ್ಲಿ ಸುಮಾರು ವರ್ಷಗಳಿಂದ ಪೂಜೆಯನ್ನು ಸಲ್ಲಿಸುತ್ತಾ ಬಂದಿದ್ದು ಸುಮಾರು ೮-೯ ವರ್ಷಗಳ ದೇಣಿಗೆ ಲೆಕ್ಕಪತ್ರವನ್ನು ನೀಡಬೇಕು. ಮತ್ತು ರಾಜ್ಯ ಸರ್ಕಾರವು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇವರ ಲೆಕ್ಕಪತ್ರವನ್ನು ಪಡೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಾನ್ಯ ಹೆಚ್.ಕೆ.ಪಾಟೀಲ್ ಇವರಿಗೆ ಮನವಿ ಮಾಡುವ ಮೂಲಕ ಒತ್ತಾಯಿಸಿದ ಪಂಪಣ್ಣ ನಾಯಕ ಕರ್ನಾಟಕ ರಕ್ಷಣಾ ವೇದಿಕೆ ಕೊಪ್ಪಳ

Related Articles

Leave a Reply

Your email address will not be published. Required fields are marked *

Back to top button
error: Content is protected !!