ಜೀಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ: ಇಂದು ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮೊನ್ನೆ ಹುಬ್ಬಳಿಯಲ್ಲಿ ನೆಡೆದ ನೇಹಾ ಹಿರೇಮಠ ಅವರ ಕೊಲೆ ಪ್ರಕರಣ ಖಂಡಿಸಿ ಇಂದು ಭಾರತೀಯ ಜನತಾ ಪಾರ್ಟಿ ವತಿಯಿಂದ ಹಿಂದೂ ವಿರೋಧಿ ಸರ್ಕಾರ ವಿರುದ್ಧ ಪ್ರತಿಭಟನೆ ಮಾಡಲಾಯಿತು.
ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ನವೀನಕುಮಾರ ಈ ಗುಳಗಣ್ಣವರ ವಿಧಾನ ಪರಿಷತ ಸದಸ್ಯರಾದ ಶ್ರೀಮತಿ ಹೇಮಲತಾ ನಾಯಕ,ಜೆಡಿಎಸ್ ಕೋರ್ ಕಮಿಟಿ ಸದಸ್ಯರಾದ ಸಿ ವಿ ಚಂದ್ರಶೇಖರ, ಜೆಡಿಎಸ್ ಜಿಲ್ಲಾಅಧ್ಯಕ್ಷರಾದ ಸುರೇಶ ಬೂಮರೆಡ್ಡಿ,ನಗರಸಭೆ ಮಾಜಿ ಸದಸ್ಯರಾದ ಶ್ರೀ ಮಾಂತೇಶ ಮೈನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಮೇಶ ನಾಡಿಗೇರ, ಶ್ರೀ ಸುನಿಲ ಹೆಸರೂರ, ಶಿವು ಅರಕೇರಿ, ಮುಖಂಡರಾದ ಗಣೇಶ ವರ್ತಟನಾಳ ಈಶಪ್ಪ ಹಿರೇಮನಿ ರಮೇಶ ಕವಲೂರ, ಶ್ರೀಮತಿ ಶೋಭಾ ನಗರಿ, ಶ್ರೀಮತಿಮಹಾಲಕ್ಷ್ಮಿ ಕಂದಾರಿ,ಶ್ರೀಮತಿ ರತ್ನಾಕುಮಾರಿ, ಶ್ರೀಮತಿ ಗೀತಾ ಮುತ್ತಾಳ, ಸೇರಿದಂತೆ ವಿವಿಧ ಮೋರ್ಚಾ ಪದಾಧಿಕಾರಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು ಕಾರ್ಯಕರ್ತರು ಮಾಧ್ಯಮ ಮಿತ್ರರು ಉಪಸ್ಥಿತರಿದ್ದರು.