ಜನ ನಾಯಕನಿಗೆ ಜನುಮ ದಿನದ ಶುಭಾಷಯಗಲು .!ರಾಜಶೇಖರ ಹಿಟ್ನಾಳ್ ಅವರಿಗೆ ಹುಟ್ಟು ಹಬ್ಬ ಶುಭಾಶಯಗಳು ಕೋರಿದ ಕಾರಟಗಿ ಕಾಂಗ್ರೆಸ್ ಅಧ್ಯಕ್ಷರುಗಳು

ಎಂಪಿ ರಾಜಶೇಖರ ಹಿಟ್ನಾಳ್ ಅವರಿಗೆ ಹುಟ್ಟು ಹಬ್ಬ ಶುಭಾಶಯಗಳು ಕೋರಿದ ಕಾರಟಗಿ ಕಾಂಗ್ರೆಸ್ ಅಧ್ಯಕ್ಷರುಗಳು
ಕೊಪ್ಪಳ : ಏಪ್ರಿಲ್ 04 ರಂದು ಲೋಕ ಸಭಾ ಕ್ಷೇತ್ರದ ಸದಸ್ಯರಾದ ಗೌರವಾನ್ವಿತ ರಾಜಶೇಖರ ಹಿಟ್ನಾಳ್ ಅವರ 45 ನೆಯ ಹುಟ್ಟು ಹಬ್ಬ ಆಚರಿಸಿಕೊಂಡರು. ಅವರ ಅಪಾರ ಅಭಿಮಾನಿ ಬಳಗ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಎಂಪಿ ರಾಜಶೇಖರ ಹಿಟ್ನಾಳ್ ಅವರ ಹುಟ್ಟು ಹಬ್ಬ ಬಂತೆಂದರೆ ಅವರ ಅಭಿಮಾನಿಗಳ ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿ ಸಂತೋಷದ ಸಾಗರವೇ ಹರಿಯುತ್ತದೆ,
ಕಾರಟಗಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶರಣೇಗೌಡ ಮಾಲಿಪಾಟೀಲ್, ಪುರಸಭೆ ಅಧ್ಯಕ್ಷರಾದ ಮಂಜುನಾಥ ಮೇಗೂರ್, ಕಾರಟಗಿ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ದೊಡ್ಡಬಸವ ಹಾಗೂ ಮುಖಂಡರಾದ ಅಯ್ಯಪ್ಪ ಉಪ್ಪಾರ ಇವರುಗಳು ಅವರ ನೆಚ್ಚಿನ ನಾಯಕರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಷಯಗಳನ್ನು ಕೋರಿದ್ದಾರೆ. ಸದಾ ಜನಪರ ಕಾಳಜಿಯ ವ್ಯಕ್ತಿತ್ವ ಹೊಂದಿರುವ ಹಾಗೂ ಜಿಲ್ಲೆಯ ಅಭಿವೃದ್ಧಿಯ ಚಿಂತನೆಯೊಂದಿಗೆ ಹಗಲಿರುಳು ಶ್ರಮಿಸುತ್ತಿರುವ ಎಂಪಿ ರಾಜಶೇಖರ ಹಿಟ್ನಾಳ್ ಅವರಿಗೆ ದೇವರು ಆಯುರಾರೋಗ್ಯ ನೀಡಲಿ ಎಂದು ಹಾರೈಸಿದ್ದಾರೆ



