Blog

ಅಯೋಧ್ಯೆಯಲ್ಲಿ ನಡೆಯುವ ಮಂಡಲ ಪೂಜೆಗೆ.. ಕಾರಟಗಿ ತಾಲೂಕಿನ ಯರಡೋಣಾ ಗ್ರಾಮದ- ಪುರೋಹಿತ ಕುಮಾರಸ್ವಾಮಿ ಹಿರೇಮಠಗೆ ಅವಕಾಶ

ಕಾರಟಗಿ.
ಐದು ನೂರು ವರ್ಷಗಳ ಸುದೀಘ್ರ ಹೋರಾಟದ ನಂತರ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾಗಿ ಜ.೨೨ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆಯಾಗಲಿದೆ. ಈ ಪವಿತ್ರ ಕಾರ್ಯದಲ್ಲಿ ಈಗಾಗಲೇ ದೇಶದ ವಿವಿಧ ಭಾಗದ ಶಿಲ್ಪಿಗಳು, ಕಲಾವಿದರು, ಇಂಜನೀರ್‌ಗಳಿಗೂ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ರಾಮಮಂದಿರದಲ್ಲಿ ನಿತ್ಯ ನಡೆಯುವ ಪೂಜಾ ಕಾರ್ಯಕ್ಕೂ ದೇಶದ ವಿವಿಧ ಭಾಗದ ಪಂಡಿತರನ್ನು ಆಯ್ಕೆ ಮಾಡಲಾಗಿದೆ. ಇದೇ ರೀತಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯ ಪ್ರಾಣ ಪ್ರತಿಷ್ಟಾಪನೆ ನಂತರ ೪೮ ದಿನಗಳ ಕಾಲ ನಡೆಯುವ ಶೈವಾಗಮನ ಪದ್ಧತಿಯ ಮಂಡಲ ಪೂಜೆಗೆ ಕಾರಟಗಿ ತಾಲೂಕಿನ ಯಡೋಣಾ ಗ್ರಾಮದ ಪುರೋಹಿತ ಕುಮಾರಸ್ವಾಮಿ ಹಿರೇಮಠ ಅವರಿಗೆ ಅವಕಾಶ ನೀಡಿರುವುದು ಕೊಪ್ಪಳ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ತಮಗೆ ೪೮ ದಿನಗಳ ಮಂಡಲ ಪೂಜೆ ಪೌರೋಹಿತ್ಯದ ಅವಕಾಶ ಕಲ್ಪಿಸಿರುವ ಕುರಿತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಕರೆ ಬಂದಿರುವ ಕುರಿತು ಕುಮಾರಸ್ವಾಮಿ ಹಿರೇಮಠ ಅವರು ಮಾಹಿತಿ ನೀಡಿದ್ದಾರೆ. ಜ.೨೨ ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಯಾಗಿ ನಂತರ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಟಾಪನೆ ನಡೆಯಲಿದೆ. ಈ ನಿಮಿತ್ಯ ಅಯೋಧ್ಯೆಯ ಭವ್ಯ ಮಂದಿರದಲ್ಲಿ ಹತ್ತಾರು ರೀತಿಯ ಧಾರ್ಮಿಕ ಪೂಜೆಗಳು, ಹೋಮ ಮಂಡಲ ಪೂಜೆ ಮತ್ತಿತರ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ೪೮ ದಿನಗಳ ಮಂಡಲ ಪೂಜೆಯನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ನಿತ್ಯ ಅಯೋಧ್ಯೆಯಲ್ಲಿ ೧೦೦೮ ಮಂಡಲ ಪೂಜೆ ನಡಯಲಿದೆ. ಪ್ರತಿಯೊಂದು ಮಂಡಲಕ್ಕೆ ಒಬ್ಬ ಪುರೋಹಿತರನ್ನು ನೇಮಕ ಮಾಡಿದ್ದಾರೆ. ಪ್ರತಿ ನಿತ್ಯ ೧೦೦೮ ಅರ್ಚಕರಿಗೆ ಅವಕಾಶ ನೀಡಿದ್ದು, ಪ್ರತಿ ನಿತ್ಯವೂ ಅರ್ಚಕರು ಬದಲಾಗಲಿದ್ದಾರೆ. ನನಗೆ ಫೆ.೨ ರಂದು ನಡೆಯುವ ಮಂಡಲ ಪೂಜೆಯಲ್ಲಿ ಅವಕಾಶ ನೀಡಿದ್ದಾರೆ. ಈ ಪೂಜೆಯಲ್ಲಿ ಪೌರೋಹಿತ್ಯಕ್ಕಾಗಿ ನನಗೆ ಅವಕಾಶ ಕಲ್ಪಿಸಿರುವ ಕುರಿತು ಮಾಹಿತಿ ನೀಡಿದ್ದಾರೆ. ಹೀಗಾಗಿ ನಾನು ಅಯೋಧ್ಯೆಗೆ ತೆರಳುತ್ತಿದ್ದೇನೆ. ಅಯೋಧ್ಯೆಯ ರಾಮಮಂದಿರ ಉದ್ಘಾಟನೆ ಸಂದರ್ಭದಲ್ಲಿ ನಡೆಯುವ ಮಂಡಲ ಪೂಜೆಯಲ್ಲಿ ನನಗೆ ಅವಕಾಶ ಕಲ್ಪಿಸಿರುವುದು ಸಂತೋಷವಾಗಿದೆ. ನನಗೆ ಇದೊಂದು ಸಂಭ್ರಮದ ಕ್ಷಣ ಎಂದು ಭಾವಿಸಿದ್ದೇನೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. ಯರಡೋಣಾ ಗ್ರಾಮದ ಕುಮಾರಸ್ವಾಮಿ ಹಿರೇಮಠ ಅವರಿಗೆ ಅವಕಾಶ ನೀಡಿದಂತೆ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ಕೊಡಲು ದೇಶದ ವಿವಿಧ ಭಾಗಗಳಿಂದ ಪಂಡಿತರಿಗೆ ಅವಕಾಶ ನೀಡಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!