ವಿದ್ಯಾಭಾರತಿ ಮಹಿಳಾ ಮಹಾವಿದ್ಯಾಲಯಕ್ಕೆ ವಿಚಕ್ಷಕ ದಳದ ಭೇಟಿ* ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಚಂದ್ರಶೇಖರ್ ಅವರ ಮೇಲಿನ ಆರೋಪ ಸುಳ್ಳು….. ಶಿವಲಿಂಗ ಆರ್ ಸಾಹು
ವರದಿ ಸುಂದರರಾಜ್ BA ಕಾರಟಗಿ

ವಿದ್ಯಾಭಾರತಿ ಮಹಿಳಾ ಮಹಾವಿದ್ಯಾಲಯಕ್ಕೆ ವಿಚಕ್ಷಕ ದಳದ ಭೇಟಿ* ವಿಶ್ವವಿದ್ಯಾನಿಲಯದ ಕುಲ ಸಚಿವರಾದ ಚಂದ್ರಶೇಖರ್ ಅವರ ಮೇಲಿನ ಆರೋಪ ಸುಳ್ಳು….. ಶಿವಲಿಂಗ ಆರ್ ಸಾಹು
ಕಾರಟಗಿ ; ಪಟ್ಟಣದ ಚಳ್ಳೂರ್ ರಸ್ತೆಯಲ್ಲಿರುವ ಶ್ರೀ ವಿದ್ಯಾಭಾರತಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಬಿ ಎ ಮತ್ತು ಬಿ ಕಾಮ್ ಪರೀಕ್ಷಾ ಕೇಂದ್ರಕ್ಕೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ವಿಚಕ್ಷಕ ದಳದ ಅಧ್ಯಕ್ಷರಾದ ಶಿವಲಿಂಗ ಆರ್ ಸಾಹು ಮತ್ತು ಸದಸ್ಯರಾದ , ಡಾ “ರೇಣುಕಾರೆಡ್ಡಿ ಮತ್ತು ಪ್ರೊ ಲಕ್ಷ್ಮೀ ಅವರು ಭೇಟಿ ನೀಡಿದ್ದರು ನಡೆಯುತ್ತಿರುವ ಪದವಿ ಪರೀಕ್ಷೆ ಪರೀಕ್ಷೆ ಗಳನ್ನು ಪರಿಶೀಲಿಸಿದರು
ನಕಲು ಮಾಡದಂತೆ ತಡೆಯಲು ಕೈಗೊಂಡ ಕ್ರಮಗಳನ್ನು ಪರಿಶೀಲಿಸಿದರು ಸಿಸಿ ಕ್ಯಾಮರಾ ಗಳನ್ನು ಪರಿಶೀಲನೆ ಮಾಡಿದರು ಕಾಲೇಜಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.
ನಂತರ ವಿಚಕ್ಷಣ ದಳದ ಅಧ್ಯಕ್ಷರಾದ ಶಿವಲಿಂಗ ಆರ್ ಸಾಹು ರವರು ಮಾತನಾಡಿ ವಿಶ್ವ ವಿದ್ಯಾ ನಿಲಯದ ಕುಲಸಚಿವರಾದ ಡಾ.ಚಂದ್ರಶೇಖರ್ ಅವರು ಅವರ ಮೇಲಿನ ಭ್ರಷ್ಟಾಚಾರ ಆರೋಪ ಸಂಪೂರ್ಣ ಸುಳ್ಳು ಅವರು ಬಾಹ್ಯ ಹಿರಿಯ ಮೇಲ್ವಿಚಾರಕರು ಮತ್ತು ವಿಚಕ್ಷಣ ದಳದ ಅಧಿಕಾರಿಗಳ ನೇಮಕ ವಿಚಾರದಲ್ಲಿ ಯಾವುದೇ ರೀತಿಯ ಹಣ ಪಡೆದಿಲ್ಲ ಕಳೆದ ಎರಡು ಮೂರು ವರ್ಷಗಳಿಂದ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಹಾಗೂ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ತುಂಬಾ ಅನುಕೂಲ ಮಾಡಿದ್ದಾರೆ ಸಕಾಲಕ್ಕೆ ಫಲಿತಾಂಶ ನೀಡಿದ್ದಾರೆ
ಇದು ವಿದ್ಯಾರ್ಥಿನಿಯರ ಮುಂದಿನ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಮಾಡಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ವಿದ್ಯಾ ಭಾರತಿ ಕಾಲೇಜಿನ ಪ್ರಚಾರ್ಯರಾದ ಶ್ರೀ ವೀರೇಶ್ ಹಾಲಸಮುದ್ರಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.