ಕಾರಟಗಿ

ಕಾಂಗ್ರೆಸ್ ಸರ್ಕಾರ ನಾಯಕ ಸಮಾಜದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ ? ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತ್ ಹಿಂಪಡೆಯಬೇಕು..ಮಂಜುನಾಥ್ ನಾಯಕ್  ಒತ್ತಾಯ

ವರದಿ ಸುಂದರರಾಜ್ BA ಕಾರಟಗಿ

ಕಾಂಗ್ರೆಸ್ ಸರ್ಕಾರ ನಾಯಕ ಸಮಾಜದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ ? ಹಿರಿಯ ಪೊಲೀಸ್ ಅಧಿಕಾರಿಗಳ ಅಮಾನತ್ ಹಿಂಪಡೆಯಬೇಕು..ಮಂಜುನಾಥ್ ನಾಯಕ್  ಒತ್ತಾಯ

ಕಾರಟಗಿ ; ಐಪಿಎಲ್ ಗೆದ್ದಿರುವ ಆರ್ ಸಿ ಬಿ ತಂಡದ ಆಟಗಾರರ ವಿಜಯೋತ್ಸವವವನ್ನು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಯೋಜನೆ ಮಾಡಿ ಅಧಿಕಾರಿಗಳನ್ನು ಅಮಾನತ್ ಮಾಡಿ ಕಾಂಗ್ರೆಸ್ ಸರ್ಕಾರ ಜನರು ನೀಡಿರುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ(ಯು.ಘ) ಬಿ. ಮಂಜುನಾಥ ನಾಯಕ
ಜಿಲ್ಲಾ ಉಪಾದ್ಯಕ್ಷರು ಬೇಸರ ವ್ಯಕ್ತ ಪಡಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಯಾದ ಮಾನ್ಯ ಶ್ರೀ ಸಿದ್ದರಾಮಯ್ಯನವರು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಮಾಣಿಕ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು ಎಷ್ಟು ಸರಿ ? ಅಥವಾ ನಾಯಕ ಸಮಾಜದ ಪ್ರಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಮುಗಿಸುವ ಷಡ್ಯಂತರವೆ ? ಎನ್ನುವ ಪ್ರಶ್ನೆಯನ್ನು ರಾಜ್ಯದ ವಾಲ್ಮಿಕಿ ನಾಯಕ ಸಮಾಜವು ಸರ್ಕಾರದ ಮುಂದಿಡುತ್ತಿದ್ದು ಇದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಬೇಕು

ಐಪಿಎಲ್ ಸಂಭ್ರಮಾಚರಣೆ ವಿಜಯೋತ್ಸವದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ಲಕ್ಷಾಂತರ ಅಭಿಮಾನಿಗಳು ಭಾಗಿಯಾಗಿದ್ದು ಕಲ್ತುಳಿತದಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು ಆದರೆ ವಾಲ್ಮೀಕಿ ನಾಯಕ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಬೆಂಗಳೂರು ನಗರ ಆಯುಕ್ತರುದ ಶ್ರೀ ದಯಾನಂದ ಅವರ ಮೇಲೆ ಅಮಾನತು ಶಿಕ್ಷೆ ಕೊಡುವುದು ಯಾವ ನ್ಯಾಯ? ಎಂಪಿ ಚುನಾವಣೆಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಣ ಲೂಟಿ ಪ್ರಕರಣ ಮತ್ತು ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಸಾವಿರಾರು ಕೋಟಿ ರೂಪಾಯಿಗಳನ್ನು ಗ್ಯಾರೆಂಟಿ ಯೋಜನೆಗೆ ಉಪಯೋಗಿಸುವುದು ಬುಡಕಟ್ಟು ಸಚಿವಾಲಯಕ್ಕೆ ಸಚಿವರು ಇಲ್ಲದಂತೆ ನೋಡಿಕೊಳ್ಳುವುದು ಸಿದ್ದರಾಮಯ್ಯನ ಸರ್ಕಾರದ ಸೇಡಿನ ರಾಜಕಾರಣದ ಭಾಗವಾಗಿದೆ. ವಾಲ್ಮೀಕಿ ನಾಯಕ ಜನಾಂಗದ ಸಚಿವರುಗಳಿಗೆ ಶಾಸಕರುಗಳಿಗೆ ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಇಂತಹ ಅನಾಹುತಗಳು ಆಗುತ್ತಿರಲಿಲ್ಲ ಎಂದು ಆಗ್ರಹ ವ್ಯಕ್ತಪಡಿಸಿದರು

ಸರಕಾರ ವಾಲ್ಮೀಕಿ ಜನಾಂಗವನ್ನು ಗುರಿಯಾಗಿಸಿಕೊಂಡಿದೆಯಾ? ಈ ಮುಂಚೆ ಪೊಲೀಸ್ ಅಧಿಕಾರಿಯಾದ ಶ್ರೀ ರವಿ ಡಿ ಚೆನ್ನಣ್ಣವರಿಗೆ ಎಷ್ಟು ಕಿರುಕುಳ ಕೊಟ್ಟಿರಿ ಎಂಥ ಸ್ಥಾನಮಾನಗಳನ್ನು ಕೊಟ್ಟಿದ್ದೀರಿ ಎಂಬುದು ಸಮಾಜಕ್ಕೆ ಗೊತ್ತಿದೆ. ದಕ್ಷ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ಕೊಡುವುದಾದರೆ ಬೆಂಗಳೂರು ಘಟನೆಗೆ ಗೃಹ ಸಚಿವರು ಕೂಡ ಅಷ್ಟೇ ಜವಾಬ್ದಾರಿ. ಗೃಹ ಸಚಿವರನ್ನು 24 ಗಂಟೆಯಲ್ಲಿ ಸಚಿವ ಸ್ಥಾನದಿಂದ ಕಿತ್ತೊಗೆದು ಸರ್ಕಾರ ತನ್ನ ಗಟ್ಟಿತನ ತೋರಿಸಲಿ. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಯಾಕೆ ? ಅಥವಾ ಪರಿಶಿಷ್ಟ ಪಂಗಡಕ್ಕೆ ಸಂಬಂಧಿಸಿದ ಇಲಾಖೆ ಮತ್ತು ಯೋಜನೆಗಳನ್ನು ಹಾಗೂ ಅಧಿಕಾರಿಗಳನ್ನು ಮುಗಿಸುವ ತಂತ್ರವೆ ? 11 ಜನ ಅಮಾಯಕ ಜನರ ಸಾವಿಗೆ ಕಾರಣರಾಗಿದ್ದೀರಲ್ಲ ಮೊದಲು ನೀವು ರಾಜೀನಾಮೆ ಕೊಡಬೇಕು ಹಾಗೂ ಸರ್ಕಾರ ಈ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀದಯಾನಂದ ಅವರ ಅಮಾನತ್ ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ

Related Articles

Leave a Reply

Your email address will not be published. Required fields are marked *

Back to top button
error: Content is protected !!