ರಾಷ್ಟ್ರೀಯ ಸುದ್ದಿ

ಸಿಂಧೂ ಒಪ್ಪಂದ ರದ್ದತಿ ಹಿಂಪಡೆಯಲು ನಾಲ್ಕನೇ ಪತ್ರ ಬರೆದ ಪಾಕ್

ನವದೆಹಲಿ: ಸಿಂಧೂ ನದಿ ನೀರು ಒಪ್ಪಂದದ ಅಮಾನತು ಹಿಂದಕ್ಕೆ ಪಡೆಯುವಂತೆ ಕೋರಿ ಪಾಕಿಸ್ತಾನವು ಬರೋಬ್ಬರಿ 4 ಬಾರಿ ಭಾರತಕ್ಕೆ ಪತ್ರ ಬರೆದಿದೆ ಎಂದು ಮೂಲಗಳು ತಿಳಿಸಿವೆ.

ಪಹಲ್ಲಾಮ್ ದಾಳಿ ಬಳಿಕ ಪಾಕ್‌ಗೆ ಭಾರತದ ಕಡೆಯಿಂದ ಯಾವುದೇ ಸವಲತ್ತು ದೊರೆಯಬಾರದೆಂಬ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಿಂಧೂ ನದಿ ಒಪ್ಪಂದವನ್ನು ಅಮಾನತುಗೊಳಿಸಿದೆ. ಆದಾದ ಬಳಿಕ ಸಿಂಧೂವನ್ನೇ ಅವಲಂಬಿಸಿರುವ ಪಾಕ್‌ನಲ್ಲಿ ಜಲಕ್ಷಾಮದ ಪರಿಸ್ಥಿತಿ ಎದುರಾಗಿದ್ದು, ನೀರಿಗಾಗಿ ಭಾರತದೆದುರು ಪದೇ ಪದೆ ಮನವಿ ಮಾಡಿದೆ.

ಮೂಲಗಳ ಪ್ರಕಾರ, ಆಪರೇಷನ್ ಸಿಂದೂರ ನಡೆದ ಬಳಿಕವೂ ಪಾಕ್ ಪತ್ರ ಬರೆದಿದೆ. ಪಾಕ್‌ನ ಜಲಸಂಪನ್ಮೂಲ ಸಚಿವ ಭಾರತದ ಜಲಶಕ್ತಿ ಸಚಿವಾಲಯಕ್ಕೆ ಪತ್ರಗಳನ್ನು ಬರೆದಿದ್ದು, ಅದನ್ನು ಬಳಿಕ ವಿದೇಶಾಂಗ ಇಲಾಖೆಗೆ ವರ್ಗಾಯಿಸಲಾಗಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!