ಆರೋಗ್ಯಕರ ಜೀವನಕ್ಕೆ ಪರಿಸರ ಉಳಿಸಿ,,! ಬಸಯ್ಯ ಹಿರೇಮಠ,,*

*ಪರಿಸರ ಉಳಿದರೇ ಮಾನವನ ಉಳಿವು,,! ಪರಿಸರ ಅಳಿದರೇ ಮಾನವನ ನಾಶ,,*
ಕೊಪ್ಪಳ : ಮಾನವ ತನ್ನ ಐಶಾರಾಮಿ ಬದುಕಿಗಾಗಿ ಪರಿಸರವನ್ನು ನಾಶ ಮಾಡುತಿದ್ದು, ಮುಂದಿನ ದಿನಗಳಲ್ಲಿ ಹಣಕೊಟ್ಟು ಆಮ್ಲಜನಕ ಖರೀದಿಸುವ ಸನ್ನಿವೇಶ ಎದುರಾಗಲಿದ್ದು ಉತ್ತಮ ಆರೋಗ್ಯಕರ ಜೀವನಕ್ಕೆ ಪರಿಸರ ಉಳಿಸಿ ಬೆಳಸಬೇಕು ಎಂದು ಮೈನಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾದ್ಯಯ ಬಸಯ್ಯ ಹಿರೇಮಠ ಹೇಳಿದರು.
ಅವರು ಗುರುವಾರದಂದು ತಾಲೂಕಿನ ಮೈನಳ್ಳಿಯ ಶ್ರೀ ಶಿವಶರಣೆ ಬುಡ್ಡಮ್ಮದೇವಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಯುವ ಜಾಗೃತಿ ಸಂಸ್ಥೆಯ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಸಸಿಗೆ ನೀರೆರೆದು ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಗಳು ತಮ್ಮ ಹುಟ್ಟು ಹಬ್ಬ, ಮದುವೆ ಇನ್ನಿತರೇ ಕಾರ್ಯಕ್ರಮಗಳನ್ನು ಮೋಜು ಮಸ್ತಿ ಮಾಡಿ ಹಣ ಪೋಲು ಮಾಡುವ ಬದಲು ಒಂದು ಸಸಿ ನೆಟ್ಟು ಅದರ ಆರೈಕೆ ಮಾಡಿದಾಗ ಅದೊಂದು ಬೃಹತ್ ಮರವಾಗಿ ಸಾವಿರಾರು ಜೀವ ಸಂಕುಲಕ್ಕಲ್ಲದೇ ಮುಂದಿನ ಪೀಳಿಗೆಗೆ ಉತ್ತಮ ಆಮ್ಲಜನಕ ಪೂರೈಸುವ ಮಾತೆಯಾಗುತ್ತದೆ ಎಂದರು.
ನಂತರ ಶಿಕ್ಷಕರಾದ ಕೃಷ್ಣ ಅವರು ಮಾತನಾಡಿ ಒಡಲಾಳದಲ್ಲಿ ಅಡಗಿರುವ ಖನಿಜ ಸಂಪತ್ತಿಗಾಗಿ ಹಾಗೂ ಬೃಹತ್ ಕೈಗಾರಿಕೆ, ರಸ್ತೆ, ದೊಡ್ಡ ದೊಡ್ಡ ಬಂಗಲೆ ನಿರ್ಮಾಣ ಸೇರಿದಂತೆ ವಾಣಿಜ್ಯೋದ್ಯಮದ ನೆಪದಲ್ಲಿ ಪ್ರತಿನಿತ್ಯ ಸಾವಿರಾರು ಮರಗಳ ಮಾರಣ ಹೋಮ ನಡೆಯುತಿದ್ದು, ದಿನನಿತ್ಯ ಬಳಕೆ ಮಾಡುವ ಪ್ಲಾಸ್ಟಿಕ್ ಕೂಡ ಜಲ ಮಾಲಿನ್ಯವನ್ನು ಉಂಟುಮಾಡುತ್ತದೆ ಇದು ಹೀಗೆ ಮುಂದೊರೆದರೇ ಮಾನವನ ಅಳಿವು ಖಂಡಿತ, ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿ ಒಂದೊಂದು ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ಉಳಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಉದಯ್ ತೋಟದ ಮಾತನಾಡಿ ಕೊಪ್ಪಳ ಜಿಲ್ಲಾದ್ಯಂತ ಕಾರ್ಖಾನೆಗಳ ಹಾವಳಿ ಮಿತಿ ಮಿರುತಿದ್ದು ಮುಂದಿನ ದಿನಗಳಲ್ಲಿ ಪರಿಸರದಲ್ಲಿ ವಾಯು ಮಾಲಿನ್ಯ ಉಂಟಾಗುವ ಜೊತೆಗೆ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಅಸ್ತಮಾ ಇನ್ನಿತರೇ ಖಾಯಿಲೆಗಳಿಗೆ ತುತ್ತಾಗುವ ಸನ್ನಿವೇಶ ಎದುರಾಗಲಿದೆ ಜೊತೆಗೆ ನಾವು ಸೇವಿಸುವ ಆಹಾರವು ವಿಷಕಾರಿ ಅಂಶದಿಂದ ಕೂಡಿರುತ್ತದೆ ಮನುಷ್ಯ ಆರೋಗ್ಯವಾಗಿರಲು ಸ್ವಚಂದ ಪರಿಸರ ಮುಖ್ಯವಾಗಿದೆ ಎಂದು ಹೇಳಿದರು.
ಪರಿಸರಕ್ಕೆ ಹಾನಿಕಾರಕ ಪ್ಲಾಸ್ಟಿಕ್ ನ್ನು ನಿಷೇದಿಸಬೇಕು ಕೇವಲ ಒಂದು ಗ್ರಾಮ, ನಗರಗಳಲ್ಲಿ ಪ್ಲಾಸ್ಟಿಕ್ ನಿಷೇದದ ಜಾಗೃತಿ ಮೂಡಿಸುವ ಬದಲು ಪ್ಲಾಸ್ಟಿಕ್ ಉತ್ಪಾದನೆಯ ಕಾರ್ಖಾನೆಗಳಿಗೆ ವಿವಿಧ ಖನಿಜ ಸಂಪತ್ತನ್ನು ಪರಿಸರವನ್ನು ದ್ವಂಸಗೊಳಿಸುವ ಕಾರ್ಖಾನೆಗಳಿಗೆ ಕಡಿವಾಣ ಹಾಕಲು ಕೇಂದ್ರ ಹಾಗೂ ರಾಜ್ಯ ಸರಕಾರ ಮುಂದಾಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಸ್ವಾಗತ ಭಾಷಣ ಶಿಕ್ಷಕರಾದ ನೀಲಪ್ಪ ಅವರು ನಿರ್ವಹಿಸಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಬಸಯ್ಯ ಹಿರೇಮಠ, ಎಸ್ ಡಿ ಎಂ ಸಿ ಅಧ್ಯಕ್ಷ ಗವಿಸಿದ್ದಪ್ಪ ಬಳಿಗೇರಿ, ಪತ್ರಕರ್ತರಾದ ಉದಯ ತೋಟದ, ಗೋಡಿ ಟೆಕ್ನಾಲಜಿಸ್ ಮುಖ್ಯಸ್ಥರಾದ ಪ್ರದೀಪ ಗೋಡಿ ಹಾಗೂ ಶಾಲೆಯ ಶಿಕ್ಷಕವೃಂದ, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು