ಸಂವಿಧಾನ ನಮ್ಮನ್ನು ಜಗತ್ತಿಗೆ ಪರಿಚಯಿಸಿದೆ.. ತಹಶೀಲ್ದಾರ್ ಕುಮಾರಸ್ವಾಮಿ

ವಿಜೃಂಭಣೆಯಿಂದ ಜರುಗಿದ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮ
ಬಾಬಾ ಸಾಹೇಬರ ಸಂವಿಧಾನ ನಮ್ಮನ್ನು ವಿಶ್ವಕ್ಕೆ ಪರಿಚಯಿಸಿದೆ: ತಹಶೀಲ್ದಾರ್ ಕುಮಾರಸ್ವಾಮಿ ಎಂ
ಕಾರಟಗಿ : ತಾ, ಆಡಳಿತ, ತಾ ಪಂ ಪುರಸಭೆ ಕಾರಟಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜನ್ಮ ದಿನಾಚರಣೆ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ರವರ 118ನೇ ಜನ್ಮ ದಿನಾಚರಣೆ
-ಸೋಮವಾರ ಜರುಗಿತು. ಪುರಸಭೆ ಕಾರಟಗಿ ಹತ್ತಿರ ಟ್ರ್ಯಾಕ್ಟರ್ ಗೆ ವಿಶೇಷ ಅಲಂಕಾರ ಮಾಡಿ ಬಿಆರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಮ್ ಇವರ ಭಾವಚಿತ್ರಗಳನ್ನು ಮೆರವಣಿಗೆ ಟ್ರ್ಯಾಕ್ಟರ್ ನಲ್ಲಿ ಇಟ್ಟು ಪೂಜೆ ಸಲ್ಲಿಸಲಾಯಿತು ನಂತರ ನವಲಿ ಸರ್ಕಲ್ ಮುಖಾಂತರ ಕಾರಟಗಿ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನದವರೆಗೆ ಕಂದಾಯ ಅಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಉಪನೊಂದಣಿ ಅಧಿಕಾರಿಗಳು, ಪತ್ರಾಂಕಿತ ಉಪ ಖಜಾನೆ ಅಧಿಕಾರಿಗಳು ಪೌರಕಾರ್ಮಿಕರು ಶಿಕ್ಷಣ ಪ್ರೇಮಿಗಳು ದಲಿತಪರ ಸಂಘಟನೆ ಮುಖಂಡರುಗಳು ಪಾಲ್ಗೊಂಡುಮೆರವಣಿಗೆ ಸಾಗಿತು.
ವೇದಿಕೆ ಕಾರ್ಯಕ್ರಮದ ಘನ ಉಪಸ್ಥಿತಿಯನ್ನು
ಶ್ರೀಮತಿ ರೇಖಾ ರಾಜಶೇಖರ ಆನೆಹೊಸೂರ, ಅಧ್ಯಕ್ಷರು, ಪುರಸಭೆ ಕಾರಟಗಿ,ಶ್ರೀಮತಿ ದೇವಮ್ಮ ಗಂಗಪ್ಪ ಉಪಾಧ್ಯಕ್ಷರು, ಪುರಸಭೆ ಕಾರಟಗಿ ವಹಿಸಿಕೊಂಡಿದ್ದರು
ಶ್ರೀ ಡಾ|| ರಾಜಶೇಖರ ನಾರಿನಾಳ ವೈದ್ಯಾಧಿಕಾರಿಗಳು ಮಲ್ಲಾಪುರ
(ಡಾ. ಬಿ.ಆರ್. ಅಂಬೇಡ್ಕರ್ ರವರ ಕುರಿತು)ಶ್ರೀ ಲಿಂಗಣ್ಣ ಜಂಗಮರಹಳ್ಳಿ ಇವರು ಉಪನ್ಯಾಸ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಎಂ. ಕುಮಾರಸ್ವಾಮಿ ತಹಶೀಲ್ದಾರರು ಹಾಗೂ ಅಧ್ಯಕ್ಷರು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ಕಾರಟಗಿ ಇವರು ವಹಿಸಿದ್ದರು ,ಶ್ರೀ ಸುಧೀರ ಎಂ. ಬೆಂಕಿ ಆರಕ್ಷಕ ನಿರೀಕ್ಷಕರು ಪೊಲೀಸ್ ಠಾಣೆ ಕಾರಟಗಿ
ಶ್ರೀಮತಿ ಲಕ್ಷ್ಮೀದೇವಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತಿ, ಕಾರಟಗಿ,,ಶ್ರೀ ಸುರೇಶ ಶೆಟ್ಟಿ, ಮುಖ್ಯಾಧಿಕಾರಿಗಳು ಪುರಸಭೆ, ಕಾರಟಗಿ
ಡಾ| ಶೃತಿ ಎಂ. ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಗಂಗಾವತಿ, ಹಾಗೂ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಇವರುಗಳೆಲ್ಲ ಭಾಗವಹಿಸಿ ಡಾಕ್ಟರ್ ಜಗಜೀವನ್ ರಾಮ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು,
ಬಳಿಕ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಮತ್ತು ದಿನನಿತ್ಯ ಕಾಯಕದಲ್ಲಿ ನಿರತರಾಗಿರುವ ಪೌರಕಾರ್ಮಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾರಟಗಿ ತಹಶಿಲ್ದಾರರು, ಮಾತನಾಡಿ
ನಮಗೆ ಸ್ವಾತಂತ್ರ್ಯ ದೊರೆತು 78 ವರ್ಷಗಳು ಕಳೆದಿವೆ ಇವತ್ತು ದೇಶ ವಿಶ್ವ ಮಟ್ಟದಲ್ಲಿ ಭಾರತ ದೇಶ ಹೆಸರು ಮಾಡಿದೆ ಅಂದರೆ ಅದಕ್ಕೆಲ್ಲ ಕಾರಣ ಬಿ ಆರ್ ಅಂಬೇಡ್ಕರ್. ಅವರು ಕೊಟ್ಟಿರುವ ಸಂವಿಧಾನದಿಂದಲೇ ಇವತ್ತು ಪ್ರತಿಯೊಬ್ಬರು ಸಮಾನತೆಯಿಂದ ಸಹಬಾಳ್ವೆಯಿಂದ ನೆಮ್ಮದಿಯಿಂದ ಜನಗಳು ಜೀವನ ಸಾಗಿಸುತ್ತಿದ್ದಾರೆ, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಿಂದಲೇ ದೇಶದ ಜನಗಳಾದ ನಾವು ಹಕ್ಕುಗಳನ್ನು ಪಡೆದಿದ್ದೇವೆ, ಶಾಸಕಾಂಗ ಕಾರ್ಯಾಂಗ ನ್ಯಾಯಾಂಗ ವ್ಯವಸ್ಥೆ ಸಂವಿಧಾನದ ಮೂಲ ತತ್ವಗಳ ಅಡಿಯಲ್ಲಿ ನಿರ್ಮಾಣವಾಗಿದೆ ಅಂಬೇಡ್ಕರ್ ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಪಾಲಿಸಿ ಸಂವಿಧಾನವನ್ನು ಉಳಿಸಿ ಬೆಳೆಸಿ ಕೊಳ್ಳಬೇಕಾದ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ಎಂದರು
ಈ ಸಂದರ್ಭದಲ್ಲಿ ಕಾರಟಗಿ ತಾಲೂಕ ಆಡಳಿತದ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ದಲಿತ ಪರ ಸಂಘಟನೆಗಾರರು ರೈತ ಮುಖಂಡರುಗಳು ಉಪಸ್ಥಿತರಿದ್ದರು.