Breaking
Thu. May 16th, 2024

ಕೊಪ್ಪಳ ವಕೀಲರ ಸಂಘದ ಚುನಾವಣೆ ಅಧ್ಯಕ್ಷರಾಗಿ ಏ ವಿ ಕಣವಿ ಖಜಾಂಚಿಯಾಗಿ ರಾಜಸಾಬ್ ಬೆಳಗುರ್ಕಿ ಆಯ್ಕೆ

By gbnewskannada Apr25,2024

ಕೊಪ್ಪಳ, 24- ತೀವ್ರ ಕುತೂಹಲ ಮೂಡಿಸಿದ್ದ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಬುಧವಾರ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಈ ಅವದಿಗೆ ಅಧ್ಯಕ್ಷರಾಗಿ ಎ ವಿ ಕಣವಿ ಹಾಗೂ ಕಾರ್ಯದರ್ಶಿಗಳಾಗಿ ಪ್ರಕಾಶ ಹಾದಿಮನಿ ಆಯ್ಕೆ

A V ಕಣವಿ

ಯಾಗಿದ್ದಾರೆ. ಬುಧವಾರ ಬೆಳಿಗ್ಗೆ 435 ಸಂಘದ ಮತದಾರರಲ್ಲಿಒಟ್ಟ 408 ಮತಗಳು ಚಲಾವಣೆ ಯಾಗಿದ್ದು ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಸ್ಥಾನಗಳಿಗೆ

ಚುನಾವಣೆ ಜರುಗಿದೆ.

ಅಧ್ಯಕ್ಷರಾಗಿ ಎ ವಿ ಕಣವಿ 211 ಮತಗಳನ್ನು ಪಡೆದು ಆಯ್ಕೆ ಯಾಗಿದ್ದು ಪ್ರತಿ ಸ್ಪರ್ದಿ ಹನುಮೇಶ ಮುರಡಿ 195 ಮತಗಳನ್ನು ಪಡೆದು ಪರಾಭವ ಗೊಂಡಿದ್ದಾರೆ ಹಾಗೂ ಪಾಧ್ಯಕ್ಷರಾಗಿ ಬಸವರಾಜ ಸಜ್ಜನ್ 248 ಮತ ಪಡೆದು ಆಯ್ಕೆಯಾಗಿದ್ದಾರೆ ಪ್ರತಿ ಸ್ಪರ್ದಿ ಪ್ರಕಾಶ ಪರ್ವತ ಗೌಡರ್ 154 ಮತ ಪಡೆದು ಪರಾಭವಗೊಂಡಿದ್ದಾರೆ ಮತ್ತು ಕಾರ್ಯದರ್ಶಿಯಗಿ ಪ್ರಕಾಶ ಹಾದಿಮನಿ 235 ಮತಗಳನ್ನು ಪಡೆದು ಆಯ್ಕೆಯಾಗಿದ್ದು ಪ್ರತಿಸ್ಪರ್ದಿ ಎಸ್, ಎಂ ಮೆಣಸಿನಕಾಯಿ 171 ಮತ ಪಡೆದು ಪರಾಬವ ಗೊಂಡಿದ್ದಾರೆ, ಖಜಾಂಚಿಯಾಗಿ ರಾಜಾಸಾಬ ಬುದಗುಂಪಾ 185 ಮತಗಳನ್ನು ಪಡೆದು ಆಯ್ಕೆಯಾಗಿದ್ದು ಪ್ರತಿಸ್ಪರ್ದಿ ಬಿ.ಹೆಚ್.ಮೇಲುಸಕ್ಕರಿ 100 ಮತಗಲನ್ನು ಪಡೆದು ಪರಾಭವಗೊಂಡಿದ್ದಾರೆ.

ರಾಜಾಸಾಬ್ ಬೆಳಗುರ್ಕಿ

ಒಂದು ಬಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎ.ವಿ.ಕಣವಿ, ಉಪಾಧ್ಯಕ್ಷ ಸ್ಥಾನಕ್ಕೆ ಪಿ.ವಿ. ಪರ್ವತ ಗೌಡ್ರು, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ ಹಾದಿಮನಿ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಗುರುರಾಜ್ ಜೋಶಿ ಹಾಗೂ ಖಜಾಂಚಿ ಸ್ಥಾನಕ್ಕೆ ಬಿ.ಹೆಚ್. ಮೇಲುಸಕ್ಕರಿ ಅವರು ಸ್ಪರ್ಧೆ ಮಾಡಿದ್ದಾರೆ.

ಇನ್ನೊಂದ ಬಣದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹನುಮೇಶ ಮುರಡಿ, ಉಪಾಧ್ಯಕ್ಷ ಸ್ಥಾನಕ್ಕೆ ಬಸವರಾಜ ಸಜ್ಜನ್, ಪ್ರಧಾನ ಕಾರ್ಯದರ್ಶಿಸ್ಥಾನಕ್ಕೆ ಎಸ್, ಎಂ ಮೆಣಸಿನಕಾಯಿ,, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಸಂತೋಷ ಕವಲೂರ, ಕಜಾಂಚಿ ಸ್ಥಾನಕ್ಕೆ ರಾಜಾಸಾಬ ಬುದಗುಂಪಾ ಸ್ಪರ್ಧಿಸಿದ್ದರು.

Related Post

Leave a Reply

Your email address will not be published. Required fields are marked *