ಜನಾರ್ಧನರೆಡ್ಡಿ ದಿಡೀರ್ ದೆಹಲಿಗೆ ದೌಡು- ಅಮಿತ್ ಷಾ ಭೇಟಿ: ಮತ್ತೆ ಬಿಜೆಪಿಕಡೆ ಚಿತ್ತ.!
ಗಂಗಾವತಿ.
ಕಳೆದ ಹತ್ತು ದಿನಗಳಿಂದ ಆನೆಗೊಂದಿಯಲ್ಲಿ ಬಿಡು ಬಿಟ್ಟು ಐತಿಹಾಸಿ ಆನೆಗೊಂದಿ ಉತ್ಸವವನ್ನು ಯಶಸ್ವಿಯಾಗಿ ನಡೆಸಿ ಕೆಲವು ದಿನಗಳಿಂದ ರಾಜಕೀಯದಿಂದ ನೀರಾಳರಾಗಿದ್ದ ಶಾಸಕ ಗಾಲಿ ಜನಾರ್ಧನರೆಡ್ಡಿ ದಿಡೀರ್ ದೇಹಲಿಗೆ ತೆರಳಿ ಕೇಂದ್ರ ಗೃಹ ಮಂತ್ರಿ ಅಮಿತ್ ಷಾ ಅವರನ್ನು ಭೇಟಿ ಮಾಡಿರುವುದು ಕ್ಷೇತ್ರದ ಜನರಲ್ಲಿ ಮತ್ತು ಕೆಆರ್ಪಿಪಿ ಕಾರ್ಯಕರ್ತರಲ್ಲಿ ಕುತೂಹಲ ಮೂಡಿಸಿದೆ. ಅಮಿತ್ ಷಾ ಅವರನ್ನು ಭೇಟಿ ಮಾಡಿರುವ ಫೊಟೋವನ್ನು ಸ್ವತಃ ಶಾಸಕ ಜನಾರ್ಧನರೆಡ್ಡಿ ತಮ್ಮ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದು, ಈ ಸಂಗತಿಯನ್ನು ಕೆಆರ್ಪಿಪಿ ಕಾರ್ಯಕರ್ತರು ವಾಟ್ಸ್ಪ್ ಗ್ರುಪ್ಗಳಲ್ಲಿ ಹಂಚಿಕೊಂಡಿದ್ದು, ಜನಾರ್ಧನರೆಡ್ಡಿ ಅವರ ಚಿತ್ತ ಮತ್ತೆ ಬಿಜೆಪಿಯತ್ತ ವಾಲಿದೆ ಎಂಬ ಚರ್ಚೆ ಜೋರಾಗಿದೆ.
ಅದ್ದೂರಿ ಆನೆಗೊಂದಿ ಉತ್ಸವದ ನಂತರ ಬುಧವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಕಾಮಗಾರಿಗೆ ಭೂಮಿಪೂಜೆ ನಡೆಸಿ ನೇರವಾಗಿ ಬೆಂಗಳೂರಿಗೆ ತೆರಳಿದ ಜನಾರ್ಧನರೆಡ್ಡಿ ಸ್ವತಃ ತಮ್ಮ ಪಕ್ಷದ ಮುಖಂಡರಿಗೂ ಮಾಹಿತಿ ನೀಡದೇ ಗುರುವಾರ ದೇಹಲಿಗೆ ತೆರಳಿ ಅಮಿತ್ ಷಾ ಅವರನ್ನು ಬೇಟಿ ಮಾಡಿರುವ ಫೋಟೋವನ್ನು ಸಾಮಾಜಿಕ ತಾಲತಾಣಗಳಲ್ಲಿ ರವಾನಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಜನವರಿಗೆ ತಿಂಗಳಲ್ಲಿ ಮೋದಿಗೆ ಬೆಂಬಲ ಎಂದು ಹೇಳಿಕೆ ನೀಡಿದ್ದ ಜನಾಧನರೆಡ್ಡಿ ನಂತರ ನಡೆದ ರಾಜ್ಯಸಭೆ ಚುನಾವಣೆಯಲ್ಲಿ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಸಂಗ ಬೆಳೆಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿರುವ ಬಗ್ಗೆ ಗುಟ್ಟು ಬಿಟ್ಟುಕೊಡದೇ ರಾಜ್ಯ ಸರಕಾರ ಸಹಕಾರ ನೀಡಿದೆ ಎಂದು ಸಮರ್ಥನೆ ಮಾಡಿಕೊಂಡಿದ್ದರು. ಮತ್ತು ಉತ್ಸವದ ಸಮಯದಲ್ಲಿ ಬಿಜೆಪಿ ನಾಯಕರ ಬಗ್ಗೆ ಮಾಧ್ಯಮಗಳ ಮೂಲಕ ಅಸಮಾಧಾನ ವ್ಯಕ್ತಪಡಿಸಿ ಲೋಕಸಭೆ ಚುನಾವಣೆಯಲ್ಲಿ ಕೆಆರ್ಪಿಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಆದರೆ ಗುರುವಾರ ಏಕಾ ಏಕಿ ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಷಾ ಅವರನ್ನು ಭೇಟಿ ಮಾಡಿರುವುದು ಜನಾರ್ಧನರೆಡ್ಡಿ ನಡೆ ಯಾವ ಕಡೆ ಎಂಬ ಕುತೂಹಲ ಮತ್ತು ಚರ್ಚೆ ನಡೆಯುವಂತೆ ಮಾಡಿದ್ದಾರೆ.
ಶಾಸಕ ಗಾಲಿ ಜನಾರ್ಧನರೆಡ್ಡಿ ರಾಜಕೀಯವಾಗಿ ಅಥವಾ ತಾವು ಕೈಗೊಳ್ಳುವ ಯಾವುದೇ ನಿರ್ಣಯದ ಬಗ್ಗೆ ತಮ್ಮ ಪಕ್ಷದ ಯಾವುದೇ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಳ್ಳುತ್ತಾರೆ. ಹೀಗಾಗಿ ಅವರು ಅಮಿತ್ ಷಾ ಭೇಟಿ ಮಾಡಿ ಚರ್ಚಿಸಿರುವ ವಿಷಯ ಅವರಿಂದಲೇ ಬಹಿರಂಗವಾಗಬೇಕಿದೆ.