ಶಾಸಕ ಗಾಲಿ ಜನಾರ್ಧನರೆಡ್ಡಿ .. ಅಯೋಧ್ಯೆ ಮಂತ್ರಾಕ್ಷತೆ ವಿತರಣೆ

ಗಂಗಾವತಿ.
ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಮನೆ ಮನೆಗಳಿಗೆ ವಿತರಿಸುವ ಅಭಿಯಾನ ಗಂಗಾವತಿ ನಗರದಲ್ಲಿ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಈ ಅಭಿಯಾನದಲ್ಲಿ ಶಾಸಕ ಗಾಲಿ ಜನಾರ್ಧನರೆಡ್ಡಿ ಭಾಗಿಯಾಗಿದ್ದು, ನಗರದ ಹಲುವು ಮನೆಗಳಿಗೆ ಭೇಟಿ ನೀಡಿ ಅಕ್ಷತೆಯನ್ನು ವಿತರಣೆ ಮಾಡಿದರು.
ಬುಧವಾರ ನಗರದ 18 ನೇ ವಾರ್ಡಿನ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಅವರು ಅಯೋಧ್ಯೆಯಲ್ಲಿ ಜ.22 ರಂದು ಶ್ರೀರಾಮ ಮಂದಿರ ಉದ್ಘಾಟನೆ ನಿಮತ್ಯ ದೇಶಾದಾದ್ಯಂತ ಪ್ರತಿಯೊಂದು ಮನೆಗೂ ಅಯೋಧ್ಯೆಯ ಅಕ್ಷತೆ ವಿತರಣೆ ಮಾಡಲಾಗುತ್ತಿದೆ. ಗಂಗಾವತಿಯಲ್ಲೂ ಎಲ್ಲರ ಮನೆಗಳಿಗೆ ಅಕ್ಷತೆ ವಿತರಿಸಲಾಗುತ್ತಿದೆ. ಇದೊಂದು ಪವಿತ್ರ ಕಾರ್ಯವಾಗಿದೆ. ಶ್ರೀರಾಮ ಮತ್ತು ಹನುಮಂತ ಪ್ರತಿಯೊಬ್ಬರಿಗೂ ಅನುಗ್ರಹಿಸಲಿ ಎಂದರು. ನಂತರ ನಗರದ ವಿವಿಧ ಭಾಗಗಳಲ್ಲಿ ನಿವಾಸ ಮತ್ತು ಅಂಗಡಿಗಳಿಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಮೇಶ್ ಚೌಡ್ಕಿ, ಪ್ರಮುಖರಾದ ಚಂದ್ರು ಹಿರೂರ, ವಿಶ್ವನಾಥ್ ಮಾಲಿ ಪಾಟೀಲ್, ಶ್ರೀಧರ್ ಕಲ್ಮನಿ, ಶ್ರೀನಿವಾಸ ಕಂದಗಲ್, ಪುನೀತ್ ಪೂಜಾರಿ, ಪರುಶುರಾಮ ಪೂಜಾರಿ, ರವಿ ಕಲ್ಮನಿ, ಸಂತೋಷ್ ಕಲ್ಮನಿ ಮತ್ತಿತರು ಇದ್ದರು.