ಗಂಗಾವತಿಜಿಲ್ಲಾ ಸುದ್ದಿಗಳು

ಆರ್.ಸಿ.ಬಿ. ಸಂಬ್ರಮಾಚರಣೆಯಲ್ಲಿ 11 ಜನರ ಸಾವು; ರಾಜ್ಯ ಸರ್ಕಾರಕ್ಕೆ ಧಿಕ್ಕಾರ: ಪಂಪಣ್ಣ ನಾಯಕ್

ಆರ್.ಸಿ.ಬಿ. ಸಂಬ್ರಮಾಚರಣೆಯಲ್ಲಿ ನೂಕುನುಗ್ಗಲು ಸಂಭವಿಸಿ ೧೧ ಜನರ ಸಾವಿಗೆ ಕಾರಣವಾದ ಸರ್ಕಾರದ ಅ-ಸಮರ್ಪಕ ವ್ಯವಸ್ಥೆ ಕಾರಣ! ಮೃತಪಟ್ಟ ಪ್ರತಿಯೊಬ್ಬರಿಗೂ ರೂ.೫೦ ಲಕ್ಷ ಪರಿಹಾರ ನೀಡಲು ಒತ್ತಾಯಿಸಿದ ಪಂಪಣ್ಣ ನಾಯಕ, ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ (ಪ್ರೀವಿಣ್ ಶೆಟ್ಟಿ ಬಣ) ಕೊಪ್ಪಳ……….

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ದುರ್ಘಟನೆಗೆ ನಮ್ಮ ಸಂಘಟನೆಯು ಸಂತಾಪವನ್ನು ಸೂಚಿಸುತ್ತದೆ. ಸಂಬ್ರಮಾಚರಣೆಯನ್ನು ಸೂತಕವನ್ನಾಗಿ ಮಾಡಿದ ರಾಜ್ಯ ಸರ್ಕಾರಿ ವ್ಯವಸ್ಥೆಗೆ ದಿಕ್ಕಾರ. ಕಪ್ ಗೆದ್ದ ಕ್ಷಣವನ್ನು ಸಂಭ್ರಮಿಸಲು ಬಂದಿದ್ದ ಅಭಿಮಾನಿಗಳಿಗೆ ಸರ್ಕಾರದ ವೈಫಲ್ಯ ಸಾವು ನೀಡಿರುವುದು ದುರ್ದೈವ.
ಆಟಗಾರರ ಅಭಿನಂದನಾ ಸಮಾರಂಭ, ತೆರೆದ ವಾಹನದ ಮೆರವಣಿಗೆ ಮಾಡುವ ಬಗ್ಗೆ ತಡ ರಾತ್ರಿಯೇ ನಿರ್ಧರಿಸಲಾಗಿದ್ದರೂ, ಸರ್ಕಾರ, ಗೃಹ ಇಲಾಖೆ ಕಾರ್ಯಕ್ರಮವನ್ನು ಸುಸೂತ್ರವಾಗಿ ನಡೆಸುವಲ್ಲಿ ವಿಫಲವಾಗಿದೆ. ಸಕಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೇ ತರಾತುರಿಯಲ್ಲಿ ಇಂದೇ ಮಾಡುವ ಉದ್ದೇಶ ಏನಿತ್ತು? ಮುಂಜಾಗುರೂಕತೆ ಇಲ್ಲ.. ಈಗ ಹತ್ತಾರು ಸಾವು ನೋವು ಕಪ್ ಗೆದ್ದವರು ಒಳಗೆ ಸಂಭ್ರಮಿಸ್ತಾ ಇದ್ರೆ, ಅಭಿಮಾನ ತೋರಿಸೋಕೆ ಬಂದವರ ಕುಟುಂಬ ರೋಧಿಸುತ್ತಿದೆ… ಇದಕ್ಕೆಲ್ಲಾ ಸರ್ಕಾರವೇ ಹೊಣೆ ಸಂಭ್ರಮಾಚರಯನ್ನು ನೋಡಲು ಬಂದು ೧೧ ಅಭಿಮಾನಿಗಳ ಮರಣಕ್ಕೆ ನೇರ ಕಾರಣವಾಗಿರುವ ಸರ್ಕಾರವು ಪ್ರತಿಯೊಬ್ಬ ಸಾವಿಗೂ ರೂ.೫೦.೦೦ ಲಕ್ಷಗಳ ಪರಿಹಾರವನ್ನು ಘೋಷಣೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ, ಕೊಪ್ಪಳ ಜಿಲ್ಲೆಯ ಅಧ್ಯಕ್ಷರಾದ ಪಂಪಣ್ಣ ನಾಯಕ ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!