*ಮರಗಳನ್ನು ಬೆಳಸಿ, ಪ್ಲಾಸ್ಟಿಕನ್ನು ತ್ಯಜಿಸಿ ಪರಿಸರ ಸಂರಕ್ಷಿಸಿ : ಶಿವಸಾಗರ್ ಜಗದಾಲೆ

ಕುಕನೂರ : ಪ್ರತಿಯೊಬ್ಬರು ಒಂದು ಸಸಿ ನೆಟ್ಟು ಪೋಷಣೆ ಮಾಡುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು ಜೊತೆಗೆ ಪರಿಸರದಲ್ಲಿನ ಹಾನಿಕಾರಕ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದು ಮಹಿಕೋ ಸೀಡ್ಸ್ ಕಂಪನಿಯ ಕುಷ್ಟಗಿ ಮತ್ತು ಕೊಪ್ಪಳ ಕೇಂದ್ರ ಪ್ರಭಾರಿ
ಶಿವಾಜಿಸಾಗರ್ ಜಗದಾಲೆ ಹೇಳಿದರು.
ತಾಲ್ಲೂಕಿನ ಕದ್ರಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಿಕೋ ಸೀಡ್ಸ್ ಕಂಪನಿ ವತಿಯಿಂದ ವಿಶ್ವ ಪರಿಸರ ದಿನವನ್ನು ಸಸಿ ನೆಡುವ ಮೂಲಕ ಸಸಿಗಳಿಗೆ ನೀರುಣಿಸಿ ಮಾತನಾಡಿದರು.
ಪರಿಸರ ದಿನಾಚರಣೆ ಅಂಗವಾಗಿ ಮಹಿಕೋ ಕಂಪನಿಯಿಂದ ವಿದ್ಯಾರ್ಥಿಗಳಿಗೆ ರಂಗೋಲಿ, ಚಿತ್ರಕಲೆ, ಪ್ರಬಂಧ ಮತ್ತು ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ಪ್ರಥಮ ಮತ್ತು ದ್ವಿತೀಯ ಬಹುಮಾನ ವಿತರಣೆ ಮಾಡಲಾಯಿತು.
ನಂತರ ಮಹಿಕೋ ಕಂಪನಿ ವತಿಯಿಂದ ಸುಮಾರು ನೂರಕ್ಕೆ ಹೆಚ್ಚು ಸಸಿಗಳನ್ನು ರೈತರಿಗೆ ವಿತರಣೆ ಮಾಡಿ ಅವುಗಳನ್ನು ಉಳಿಸಿ ಬೆಳಸಿ ಪೋಷಿಸುವಂತೆ ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ವೆಂಕಪ್ಪ ಅರಕಲ್,ಮಹಿಕೋ ಕಂಪನಿ ಸಿಬ್ಬಂದಿಗಳಾದ ಸಂದೀಪ್ ಶರಿಗಾರ,ರಿಯಾಜ್ ಮುಂಜಾವರ್,ಪಂಪನಗೌಡ ಮಾಲಿ ಪಾಟೀಲ್ , ಹನುಮೇಶ ಹಳ್ಳಿಗುಡಿ
ಬಸವರಾಜ ಲಗಳೂರು,ಶಂಕ್ರಪ್ಪ ,ಮಂಜುನಾಥ,, ಪ್ರವೀಣ್ ಮುತ್ತಾಳ, ಸಹ ಶಿಕ್ಷಕ ಯಮನೂರಪ್ಪ ಬಜೇಂತ್ರಿ ಹಾಗೂ ಎಸ್.ಡಿ.ಎಂ.ಸಿ.ಅಧ್ಯಕ್ಷರು ಉಪಾಧ್ಯಕ್ಷರು ,ಗ್ರಾ.ಪಂ.ಸದಸ್ಯರು ಶಿಕ್ಷಕರು ಮತ್ತು ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಸೇರಿದಂತೆ ಇತರರು ಇದ್ದರು