ಸೋಮವಾರ ರಾಜೀನಾಮೆ ನೀಡ್ತಾರಾ ಕಾಂಗ್ರೆಸ್ನ ಆರು ಜನ ಶಾಸಕರು

ಬೆಂಗಳೂರು: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ದೋಸ್ತಿ ನಾಯಕರು ಸಭೆ ಮೇಲೆ ಸಭೆ ನಡೆಸಿ ಕಾರ್ಯತಂತ್ರ ರೂಪಿಸಿದ್ದಾರೆ. ಇದರ ಭಾಗವಾಗಿಯೇ ಸಂಪುಟ ವಿಸ್ತರಣೆಗೆ ಮುಂದಾಗಿದ್ದರಾದರೂ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನ ಸ್ಪೋಟಗೊಂಡಿದ್ದ ಕಾರಣ ಸಂಪುಟ ವಿಸ್ತರಣೆಯನ್ನು ಮುಂದೂಡಲಾಗಿದೆ.

ಆದರೆ, ಸರ್ಕಾರ ರಚನೆ ಪ್ರಯತ್ನವನ್ನು ಕೈ ಬಿಟ್ಟಿರುವುದಾಗಿ ಹೇಳುತ್ತಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಸಿದ್ಧತೆ ನಡೆಸಿದೆ ಎಂದು ಹೇಳಲಾಗಿದೆ. ಬಿಜೆಪಿ ಸೇರುವ ಅನ್ಯ ಪಕ್ಷದ ಶಾಸಕರಿಗೆ ಗೆಲುವು ಗ್ಯಾರಂಟಿ ಎನ್ನುವುದು ಉಮೇಶ್ ಜಾಧವ್ ಪ್ರಕರಣದಲ್ಲಿ ಸಾಬೀತಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದು, ಆಪರೇಷನ್ ಕಮಲಕ್ಕೆ ಆಹ್ವಾನ ನೀಡಿದ್ದಾರೆ.

ಈ ನಡುವೆ ಅತೃಪ್ತ ಶಾಸಕ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ 6 ಮಂದಿ ಕಾಂಗ್ರೆಸ್ ಶಾಸಕರು ಸೋಮವಾರ ರಂದು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹರಡಿದೆ. ಹಿರಿಯ ನಾಯಕರ ಆಕ್ರೋಶದಿಂದ ಕಂಗಾಲಾಗಿರುವ ಕಾಂಗ್ರೆಸ್ ನಾಯಕರು ಸಂಪುಟ ವಿಸ್ತರಣೆ ಮುಂದೂಡಿದ್ದಾರೆ. ಇಬ್ಬರು ಪಕ್ಷೇತರ ಶಾಸಕರು ಹಾಗೂ ಹಿರಿಯ ಕಾಂಗ್ರೆಸ್ ಶಾಸಕರೊಬ್ಬರು ಸಚಿವರಾಗಲಿದ್ದಾರೆ ಎನ್ನಲಾಗಿದೆ.

ಇನ್ನು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಬಹುತೇಕ ಸೋಮವಾರದಂದು 6 ಮಂದಿ ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ. ಶನಿವಾರವೇ ಆರು ಜನ ಗುಪ್ತವಾಗಿ ಶಾಸಕರೆಲ್ಲ ಸೇರಿ ಸಭೆ ನಡೆಸಿ ಸೋಮವಾರ ರಂದು ರಾಜೀನಾಮೆ ನೀಡಲು ತೆರೆಮರೆಯಲ್ಲಿ ಚಟುವಟಿಕೆಗಳು ನಡೆದಿವೆ ಎನ್ನಲಾಗಿದೆ.

Leave a Reply

Your email address will not be published. Required fields are marked *

ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿಯ ಯುವ ಸಂಕಲ್ಪ ಸಮಾವೇಶಕ್ಕೆ ತೆಜಸ್ವಿ ಸೂರ್ಯ
error: Content is protected !!