ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನ ನಿರ್ಮಾಣದ ಉದ್ಘಾಟನೆಯ ಪೂರ್ವಭಾವಿ ಸಭೆ

ಜಿಬಿ ನ್ಯೂಸ್ ಕನ್ನಡ ಸುದ್ದಿ ಕೊಪ್ಪಳ,ಜ.22: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಬಹುದಿನಗಳ ಬೇಡಿಕೆಯಾದ ನೂತನ ಪತ್ರಿಕಾ ಭವನದ ಕಟ್ಟಡಕ್ಕೆ ಅಡಿಗಲ್ಲು ಸಮಾರಂಭವನ್ನು ಇದೇ ಜ.26 ರಂದು ಬೆಳಿಗ್ಗೆ 11.I5ಕ್ಕೆ ಕೊಪ್ಪಳ ನಗರದ ಈಶಾನ್ಯ ಭಾಗದ ಯಶಸ್ವಿನಿ ಲೇಔಟ್ ಡಾಲರ್ ಕಾಲೋನಿ ಹತ್ತಿರ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಗುಡ್ಲಾನೂರು ತಿಳಿಸಿದರು.

ರವಿವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ, ಸಮಾರಂಭದ ದಿವ್ಯ ಸಾನಿಧ್ಯವನ್ನು ಗವಿಮಠದ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸುವರು. ಕೊಪ್ಪಳ ಜಿಲ್ಲಾ ಉಸ್ತುವಾರಿ

ಸಚಿವ ಆನಂದಸಿಂಗ್ ಅವರು ಶಂಕುಸ್ಥಾಪನೆಗೆ ಚಾಲನೆ ನೀಡಲಿದ್ದಾರೆ ಹಾಗೂ ಕರ್ನಾಟಕ ಚಾಲನೆ ನೀಡಲಿದ್ದಾರೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಆಶಯ ನುಡಿ ಮಾಡಲಿದ್ದಾರೆ ಎಂದು ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಸಚಿವ ಹಾಲಪ್ಪ ಆಚಾರ, ಶಾಸಕ ಕೆ.ರಾಘವೇಂದ್ರಹಿಟ್ನಾಳ, ಸಂಸದ ಕರಡಿ ಸಂಗಣ್ಣ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್‌, ನಗರಸಭೆ ಅಧ್ಯ- ಕೈ ಶಿವಗಂಗಾ ಶಿವರೆಡ್ಡಿ ಭೂಮಕ್ಕನವರ, ಜಿಲ್ಲಾಧಿಕಾರಿ ಸುಂದರೇಶಬಾಬು, ಜಿ.ಪಂ. ಸಿಇಒ ಪಿ.ಫೌಜಿಯ ತರುನ್ನುಮ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗಗಿರಿ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ,

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೊಕೇಶ, ರಾಜ್ಯ ಕಾರ್ಯದರ್ಶಿ ಹಾಗೂ ಸಂಘದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸೋಮಶೇಖರ್ ಕೆರಗೋಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೆಶಕ ಗವಿಸಿದ್ದಪ್ಪ ಹೊಸಮನಿ, ಸಂಘದ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಎಂ.ಸಾಧಿಕ್ ಅಲಿ, ವಿಶೇಷ ರಾಜ್ಯ ಕಾರ್ಯಕಾರಣಿ ಸದಸ್ಯ ಹರೀಶ್‌ ಹೆಚ್‌, ಎಸ್. ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯ ಜಿ.ಎಸ್.ಗೋನಾಳ, ಪತ್ರಿಕಾ ಭವನ ಕಟ್ಟಡ ಸಮಿತಿ ಅಧ್ಯಕ್ಷ ಎನ್‌. ಎಂ.ದೊಡ್ಡಮನಿ ಸೇರಿದಂತೆ ಜಿಲ್ಲೆಯ ಸರ್ವ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಪದಾಧಿಕಾರಿಗಳಾದ ಎಂ.ಸಾಧಿಕ್‌ ಅಲಿ, ಹರೀಶ್ ಹೆಚ್.ಎಸ್.ಜಿ.ಎಸ್.ಗೋನಾಳ, ಎನ್.ಎಂ.ದೊಡ್ಡಮನಿ, ಹನುಮಂತ ಹಳ್ಳಿಕೇರಿ, ರುದ್ರಗೌಡ ಪಾಟೀಲ್, ರಾಜು ಬಿ.ಆರ್. ಸದಸ್ಯರಾದ ಹೆಚ್.ವಿ.ರಾಜಾಬಕ್ಷಿ, ಸಾವಿತ್ರಿ ಮುಜುಂದಾರ, ಮಂಜುನಾಥ ಕೊಳೂರು, ರಾಜಾಸಾಬ ತಾಳಕೇರಿ, ಉಮೇಶ ಅಬ್ಬಿಗೇರಿ, ರವಿಚಂದ್ರ ಬಡಿಗೇರ, ಶಿವಕುಮಾರ ಹಿರೇಮಠ, ಸಿದ್ದು ಹಿರೇಮಠ, ಪ್ರಭು ಗಾಳಿ, ಖಲೀಲ್ ಹುಡೇವ್, ಉಮೇಶ ಪೂಜಾರ, ಬ್ರಹ್ಮಾನಂದ ಬಡಿಗೇರ ಅನೇಕರು ಇದ್ದರು.

Leave a Reply

Your email address will not be published. Required fields are marked *

ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿಯ ಯುವ ಸಂಕಲ್ಪ ಸಮಾವೇಶಕ್ಕೆ ತೆಜಸ್ವಿ ಸೂರ್ಯ
error: Content is protected !!