ಜನಾರ್ಧನ ರೆಡ್ಡಿ ಸಂಪತ್ತಿನ ಲೂಟಿಗಾಗಿ ಜನಾಧಿಕಾರ ಬಳಸಿಕೊಂಡಿದ್ದಾರೆ -ಶರಣಪ್ಪ ಸಜ್ಜಿಹೊಲ

ಜಿಬಿ ನ್ಯೂಸ್ ಕನ್ನಡ ಸುದ್ದಿ ಗಂಗಾವತಿ: ಬಳ್ಳಾರಿಯ ಜನತೆ ನೀಡಿದ್ದ ಅಧಿಕಾರವನ್ನು ಅಲ್ಲಿಯ ಸಂಪನ್ಮೂಲವನ್ನೆಲ್ಲ ಲೂಟಿ ಮಾಡಲು ಬಳಸಿಕೊಂಡಿರುವ ಜನಾರ್ದನ ರೆಡ್ಡಿಯವರು ಕೆ ಆರ್ ಪಿ ಪಿ ಪಕ್ಷವನ್ನು ಸ್ಥಾಪನೆ ಮಾಡುವ ಮೂಲಕ 2023ರ ವಿಧಾನಸಭಾ ಚುನಾವಣೆಗೆ ಗಂಗಾವತಿಯಿಂದ ಸ್ಪರ್ಧೆ ಮಾಡಲು ಬಯಸಿದ್ದಾರೆ.

ಆಪ್ ಪಕ್ಷದ ವಕ್ತಾರ ಶರಣಪ್ಪ ಸಜ್ಜೀಹೊಲದ್

ಈ ಮೂಲಕ ನಮ್ಮ ಕೊಪ್ಪಳ ಜಿಲ್ಲೆಯ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ನಮ್ಮ ಗಂಗಾವತಿಯ ಮತದಾರರು ರಡ್ಡಿಯ ಈ ಸಂಪನ್ಮೂಲ ಲೂಟಿಯ ದುರುದ್ದೇಶವನ್ನು ಅರಿಯದಷ್ಟು ಮೂರ್ಖರೇನಲ್ಲ. ರಡ್ಡಿಯ ನಂಬಿಕೆ ಗಂಗಾವತಿಯಲ್ಲಿ ಸಂಪೂರ್ಣ ಹುಸಿಯಾಗಲಿದೆ.

ಚಿನ್ನದ ಲಂಕೆಯ ಅಧಿಪತಿಯನ್ನೇ ಧೂಳಿಪಟ ಮಾಡಿದ ನಾಡಾಗಿರುವ ನಮ್ಮ ಗಂಗಾವತಿಯ ಪ್ರತಿಯೊಬ್ಬ ಮತದಾರನೂ ಕೊಪ್ಪಳ ಸಂಪನ್ಮೂಲ ರಕ್ಷಣೆಗಾಗಿ ಕಂಕಣ ಬದ್ಧನಾಗಿ ನಿಲ್ಲಲಿದ್ದಾನೆ.-ಎಂದು ಆಮ್ ಆದ್ಮಿ ಪಾರ್ಟಿಯ ಗಂಗಾವತಿ ತಾಲೂಕ ಅಧ್ಯಕ್ಷರು ಮತ್ತು ನ್ಯಾಯವಾದಿಗಳು ಆಗಿರುವ ಶರಣಪ್ಪ ಸಜ್ಜಿಹೊಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಮುಟ್ಟು ಕೆಟ್ಟದ್ದಲ್ಲ; ಜಾಗ್ರತೆ ಜಾಗೃತಿ ಅವಶ್ಯ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ವಿಧಾನಸಭೆಗೆ ಅಭ್ಯರ್ಥಿಯಾಗಿ ಎಎಪಿ ಯಿಂದ ಶರಣಪ್ಪ ಸಜ್ಜೀಹೊಲ ಅಧಿಕೃತ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿ ಗ್ಯಾಂಗ್ ವಾರ್; ಭೀಕರ ಹಲ್ಲೆ - ಗಂಗಾವತಿಯ ಯುವ ಸಂಕಲ್ಪ ಸಮಾವೇಶಕ್ಕೆ ತೆಜಸ್ವಿ ಸೂರ್ಯ
error: Content is protected !!