ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿ ದಬ್ಬಾಳಿಕೆ ಮಾಡುತ್ತಿದ್ದಾನೆ. ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದು ಸಿಎಫ್ಐ ರಾಜ್ಯ ಕಾರ್ಯದರ್ಶಿ ಸೈಯ್ಯದ ಸರ್ಫರಾಜ್ ಗಂಗಾವತಿ ಹೇಳಿದ್ದಾನೆ.
ಕೊಪ್ಪಳದ ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾನೆ. ಈಗಾಗಲೇ ನಾವು ಜನರಿಗೆ ಕರೆ ಕೊಟ್ಟಿದ್ದೇವೆ ಎಂದಿದ್ದಾನೆ. ಸರ್ಫರಾಜ್ ಮತ್ತು ರಸೂಲ್ ರನ್ನು ಗಂಗಾವತಿಯಲ್ಲಿ ಬಂಧಿಸಿರೋ ಪೊಲೀಸರು, ಕೊಪ್ಪಳ ಉಪ ವಿಭಾಗಾಧಿಕಾರಿ ಮುಂದೆ ಹಾಜರುಪಡಿಸಲು ಕರೆ ತಂದಿದ್ದಾರೆ.
ಈ ವೇಳೆ ಮಾಧ್ಯಮಗಳಿಗೆ ಮಾತನಾಡಿರೋ ಸರ್ಫರಾಜ್, ಇದಕ್ಕೆಲ್ಲ ನಾವು ಜಗ್ಗುವುದಿಲ್ಲ ಎಂದಿದ್ದಾನೆ. ಅಷ್ಟರಲ್ಲೇ ಪೊಲೀಸರು ಸರ್ಫರಾಜ್ ನನ್ನು ಡೈವರ್ಟ್ ಮಾಡಿದ್ದು, ಮಾತು ಮುಂದುವರೆಸಲು ಅವಕಾಶ ನೀಡಿಲ್ಲ.