ನವದೆಹಲಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ತಮ್ಮ ಪುತ್ರಿಯರ ಪಾದ ಪೂಜೆ ಮಾಡಿ, ಆಶೀರ್ವಾದ ಪಡೆದುಕೊಂಡಿದ್ದಾರೆ.
ನವರಾತ್ರಿ ಹಬ್ಬದಂದು ಕೆಲವು ಭಾಗಗಳಲ್ಲಿ ಕನ್ಯಾ ಪೂಜೆ ಮಾಡುವ ಪ್ರತೀತಿ ಇದೆ. ಈ ಮೂಲಕ 6ರಿಂದ 8 ವರ್ಷದ ಬಾಲಕಿಯರನ್ನು ಕನ್ಯಾ ಪೂಜೆಗೆ ಆಹ್ವಾನಿಸಲಾಗುತ್ತದೆ. ಆದರೆ ಗೌತಮ್ ಗಂಭೀರ್ ತಮ್ಮ ಇಬ್ಬರು ಪುತ್ರಿಯರ ಪಾದ ಪೂಜೆಯನ್ನು ಮಾಡಿ ದಸರಾ ಹಬ್ಬವನ್ನು ವಿಶೇಷವಾಗಿ ಆಚರಿಸಿದ್ದಾರೆ.
https://twitter.com/GautamGambhir/status/1181411209855127552?s=19
ಈ ಕುರಿತು ಫೋಟೋ ಟ್ವೀಟ್ ಮಾಡಿರುವ ಗೌತಮ್ ಗಂಭೀರ್, ನಾನೊಬ್ಬ ಇಬ್ಬರು ಪುತ್ರಿಯರ ತಂದೆಯಾಗಿದ್ದೇನೆ. ಪಾದೋಪಚಾರ ಕೌಶಲ್ಯವನ್ನು ಉತ್ತಮಗೊಳಿಸಿಕೊಂಡಿರುವೆ. ಅಷ್ಟೇ ಅಲ್ಲದೆ ಅಷ್ಟಮಿ ಪ್ರಯುಕ್ತ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.